ಸಾವೊಂದು ಸಾವಿರ ಜೀವನಕ್ಕೆ ದಾರಿ.........
ಸಾವು ಬಂದ ಅನಂತರ ಮೊತ್ತ ಮೊದಲು ಕೆಲಸ ಮಾಡಿದ್ದು ಕೇವಲ ಅಸ್ಪತ್ರೆಯ ಬಿಲ್ಲ್ ಕಟ್ಟಿದ್ದಲ್ಲ. ‘ಡೆತ್ ರಿಪೋರ್ಟ್’ ಅನ್ನು ಆಸ್ಪತ್ರೆಯಿಂದ ಪಡೆಯಲು ಮರೆಯಬೇಡ ಎಂದು ಹಿರಿಯರು ಹೇಳಿದರು.ಅಂತೆಯೇ ಮಾಡಿದೆ. ಆಮೇಲೆ ನೋಡುವ ಎಂದು ಹೇಳಿದರೆ ದಯವಿಟ್ಟು ಕೇಳಬೇಡಿ. ಆಮೇಲೆ ಅನಗತ್ಯ ಓಡಾಟಕ್ಕೆ ಕಾರಣವಾಗುತ್ತದೆ. ಆಮೇಲೆ ಸ್ಮಶಾನದಿಂದ ಪಂಚನಾಮೆ ಪತ್ರವನ್ನು ಪಡೆದುಕೊಂಡು, ಮಂಗಳೂರು ನಗರ ಪಾಲಿಕೆಗೆ ಹೋಗಿ ಡೆತ್ ಸರ್ಟಿಫಿಕೇಟಿಗೆ ಅರ್ಜಿಯನ್ನು ತೆಗೆದುಕೊಳ್ಳಿ. ತುಂಬಿ, ಎಷ್ಟು ಕಾಪಿ ಸಾಧ್ಯವೋ ಅಷ್ಟಕ್ಕೆ ಅರ್ಜಿ ಹಾಕಿ. ಇದು ಪ್ರತಿ ಒಂದು ಕಾರ್ಯಕ್ಕೆ ಮುಂದೆ ಸಹಕಾರಿ ಆಗುತ್ತದೆ. ಗೆಳೆಯರೊಬ್ಬರು ಅನುಭವ ದಿಂದ ಹೇಳಿದ ಮಾತಿದು. ಮನೆಯವರು ಯಾರಾದರೂ ಸಾವಿನ ಹಾದಿ ಹಿಡಿದರೆ, ಆಗ ಅವರನ್ನು ನೋಡಿಕೊಳ್ಳುವ “ಜವಾಬ್ದಾರಿ ಹೊತ್ತುಕೊಳ್ಳುವವರಿಗೆ’ ಮೂರು ಹಂತಗಳಲ್ಲಿ ಕಷ್ಟ ಎದುರಾಗುತ್ತದೆ. ನಾನು ಯಾಕೆ ಹಾಗೆ ಹೇಳಿದೆ ಎಂದರೆ ಇದು ಅನೇಕರ ಅನುಭವ. ಕೆಲವರು ಮಾತ್ರ ಸ್ವಯಂ ಸ್ಫೂರ್ತಿಯಿಂದ ಜವಾಬ್ದಾರಿಯನ್ನು ಆರಿಸುತ್ತಾರೆ ಪೂರೈಸುತ್ತಾರೆ. ಉಳಿದವರು ಕೇವಲ ದುಃಖಿಸಿ ಅಗತ್ಯವಾದ ಸಮಯದಲ್ಲಿ ನುಣುಚಿ ಕೊಳ್ಳುತ್ತಾರೆ. ಆ ಸಾವಿನ ಸಾಕ್ಷಾತ್ ದರ್ಶನವಾದಗಲೂ ವಿಧ ವಿಧದ ಲೆಕ್ಕಾಚಾರ ಹಾಕುತ್ತ ಕುಳಿತು ಆಶ್ಚರ್ಯ ಮೂಡಿಸುತ್ತಾರೆ. ಈಗ ನೀವು ಜವಾಬ್ದಾರಿ ಹೊತ್ತುಕೊಂಡೀರೆಂದರೆ ನಿಮಗೆ ಪ್ರಥಮ ಹಂತದ ನರಕ ಆಸ್ಪತ್ರೆಯಲ್ಲಿ ದರ್ಶನವಾಗುತ್ತದೆ. ನೀವು ನಿಮ್ಮ ಮನೆಯವರ