Posts

Showing posts with the label ತಾಯಿ

ಜೀವನ ಇಂದು ಮಗ್ಗುಲು ಬದಲಿಸಿತ್ತು

Image
ಜೀವನ ದಲ್ಲಿ ಗುರು ಎಂಬ ಶಬ್ದ ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖವಾದದ್ದು. ತಂದೆ,ತಾಯಿ ಜೀವನದ ಮೊದಲ ಗುರುಗಳು. ನಮಗೆ ಜೀವನದಲ್ಲಿ ದಾರಿ ದೀಪವಗುವುದು ಗುರುಗಳ ಮಾರ್ಗದರ್ಶನ. ಅಪ್ಪ ಕಾಲದಲ್ಲಿ ಲೀನವಾಗಿ ಹೋದರು. ನಾನು ಜೀವನದ ದೊಡ್ಡ ಗುರುಗಳನ್ನು ಕಳೆದುಕೊಂಡು ಬಿಟ್ಟಿದ್ದೆ.  ಅವರು ಕೊನೆಗೆ ಪಡುತ್ತಿದ್ದ ಕಷ್ಟ ಮಕ್ಕಳಾದ ನಮಗೆ ಸಹಿಸಲು ಅಸಾಧ್ಯವಗಿತ್ತು. ಇನ್ನು ಅವರೆಷ್ಟು ಮೌನವಾಗಿ ನರಳಾಡಿದರೋ ನನಗೆ ಗೊತ್ತಿಲ್ಲ. ಅಂದು ನಾನಿದ್ದ ಅಸ್ಪತ್ರೆಯ ವಾರ್ಡಿನಲ್ಲಿ ಎರಡು ಸಾವನ್ನು ಕಂಡೆ. ಇಬ್ಬರೂ ಎಪ್ಪತ್ತರ ಹರೆಯದವರು. ಸಾವಿಗಿಂತ ಮುಂಚೆ ಸಾಕಷ್ಟು ಹೋರಾಡಿದರು, ನರಳಿದರು ಆದರೆ ಸೋತರು. ಆದರೆ ಕಾಲವಾದ ನಂತರ, ದೇಹದ ಕಾವು ಅರುತ್ತಿರುವಾಗ ಒಂದು ಪ್ರಶಾಂತವಾದ ಪ್ರಭಾವಳಿಯನ್ನು ಕಂಡೆ. ಅದು ನನ್ನ ಭ್ರಮೆ ಇರಬೇಕೆಂದು ಅಂದು ಕೊಂಡೆ. ಆದರೆ ಇಬ್ಬರಲ್ಲೂ ಒಂದೇ ರೀತಿಯ ಭಾವನೆಗಳನ್ನು ಭ್ರಮಾಧೀನನಾಗಿ ಕಾಣಲು ಸಾಧ್ಯವೇ? ಅದೂ ಎಂಟು ಗಂಟೆಗಳ ನಡುವೆ? ಬದುಕುವ ಹೋರಾಟದಲ್ಲಿ   ಸೋತ ಅನಂತರ ಕೆಲವು ಗಳಿಗೆ ಒಳಗಾಗಿ ದೇಹದಲ್ಲಿ ನಿಧಾನವಾಗಿ ಸಾವಿನ ಅನಂತರದ ಜೈವಿಕ ಪ್ರಕ್ರಿಯೆಗಳು ಸಾಗುತ್ತವೆ. ಎಲ್ಲವೂ ಪ್ರಕೃತಿಯ ಅದ್ಭುತವೆಂದೇ ಹೇಳಬೇಕು. ಹೆಣ್ಣು ಗರ್ಭ ಧರಿಸುವಾಗ ಪ್ರಕೃತಿಯು ಸಂಭ್ರಮದಿಂದ ಅವಳನ್ನು ಒಂದು ಜೀವಾತ್ಮಕ್ಕೆ ಆಶ್ರಯ ನೀಡಲು ತಯಾರಿಸುತ್ತದೆ, ಅಂತೆಯೇ ಮರಣದ ಅನಂತರ ಪಾರ್ಥಿವ ಶರೀರವನ್ನು ಜೀರ್ಣಿಸುವ ಪ್ರಕ್ರಿಯೆ ಆರಂಭಗೊಳ್ಳುತ್...